ದುರಸ್ತಿ ನಡೆಯುತ್ತಿದ್ದ ಶಾಲೆಯ ಗ್ರಂಥಾಲಯದಲ್ಲಿ ಮೇಲುಸ್ತುವಾರಿ ವಹಿಸುತ್ತಿದ್ದ ಶಿಕ್ಷಕ, ಅಲ್ಲಿ ಹಾದು ಹೋಗುತ್ತಿದ್ದ ವಿದ್ಯಾರ್ಥಿಯಲ್ಲಿ ಮಗ್ಗಿ ಹೇಳಲು ತಿಳಿಸುತ್ತಾನೆ. ಆದರೆ ವಿದ್ಯಾರ್ಥಿಗೆ ಮಗ್ಗಿ ಬಾರದ್ದಕ್ಕೆ ಕುಪಿತಗೊಂಡು ವಿದ್ಯುತ್ ಚಾಲಿತ ಡ್ರಿಲ್ ಮೆಶಿನ್ ಬಳಸಿ ಕೈ ಕೊರೆದು ಗಾಯಗೊಳಿಸುತ್ತಾನೆ.
ಗುರುವಾರ ಈ ಘಟನೆ ನಡೆದಿದ್ದು, ಬಾಲಕನ ಪೋಷಕರು ಹಾಗೂ ಮಕ್ಕಳು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಶಿಕ್ಷಕನನ್ನು ಅಮಾನತುಗೊಳಿಸಿರುವ ಶಿಕ್ಷಣಾಧಿಕಾರಿ ತನಿಖೆಗಾಗಿ ಮೂವರು ಸದಸ್ಯರ ತಂಡವನ್ನು ರಚಿಸಿದ್ದಾರೆ.