‘ಗೋವು ಅಪ್ಪಿಕೊ ದಿನಕ್ಕೆ ನೀಡಿದ್ದ ಕರೆಯನ್ನು ವಾಪಸು ಪಡೆಯಬೇಕು ಎಂದು ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯವು ನಿರ್ದೇಶಿಸಿದೆ. ಇದರ ಅನ್ವಯ ಕರೆಯನ್ನು ಹಿಂಪಡೆಯಲಾಗಿದೆ’ ಎಂದು ಭಾರತೀಯ ಪ್ರಾಣಿ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಎಸ್.ಕೆ. ದತ್ತಾ ಅವರು ಹೇಳಿರುವ ಪತ್ರವನ್ನು ಮಂಡಳಿಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.