ಇಲ್ಲಿರುವ ತಾತ್ಕಾಲಿಕ ಮಂದಿರದಲ್ಲಿ ರಾಮನಿಗೆ ಪೂಜೆ ಸಲ್ಲಿಸಿ ಮಾತನಾಡಿದ ಮೋದಿ, ‘ಮುಂದಿನ 25 ವರ್ಷಗಳಲ್ಲಿ ಭಾರತೀಯರು ಅತ್ಯಂತ ಕಠಿಣವಾದ ಗುರಿಗಳನ್ನು ತಲುಪಲು ಮತ್ತು ಅಭಿವೃದ್ಧಿಯನ್ನು ಸಾಧಿಸಲು ಶ್ರೀರಾಮನ ಧ್ಯೇಯಗಳೇ ದಾರಿದೀಪವಾಗಲಿವೆ. ಸಂವಿಧಾನದ ಮೂಲಪ್ರತಿಯಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಚಿತ್ರವಿತ್ತು. ಇದು ಸಂವಿಧಾನವು ನಮಗೆ ನೀಡಿರುವ ಹಕ್ಕುಗಳಿಗೆ ಮತ್ತೊಂದು ಖಾತರಿ’ ಎಂದು ಮೋದಿ ಹೇಳಿದ್ದಾರೆ.