ನ್ಯೂ ಜಲಪಾಯಿಗುಡಿಯಿಂದ ಹೌರಾಕ್ಕೆ ಚಲಿಸುತ್ತಿದ್ದ 22302 ಸಂಖ್ಯೆಯ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಕಟಿಹಾರ್ ರೈಲ್ವೆ ವಿಭಾಗದ ಹಿರಿಯ ಭದ್ರತಾ ಕಮಿಷನರ್ ಕಮಲ್ ಸಿಂಗ್ ಹೇಳಿದ್ದಾರೆ.
ಕಲ್ಲು ತೂರಾಟದ ಬಗ್ಗೆ ಪ್ರಯಾಣಿಕರು ದೂರು ನೀಡಿದ ಬಳಿಕ ಘಟನೆ ಬಯಲಾಗಿದೆ. ಬಳಿಕ ರೈಲು ಪರಿಶೀಲಿಸಿದಾಗ ಬೋಗಿಯ ಕಿಟಕಿಯಲ್ಲಿ ಬಿರುಕು ಕಂಡುಬಂದಿದೆ.
ಜನವರಿ 3ರಂದು ಕಿಶಾನ್ಗಂಜ್ ಜಿಲ್ಲೆಯಲ್ಲಿ ಕಲ್ಲು ತೂರಾಟ ನಡೆಸಿದ್ದ ಕಿಡಿಗೇಡಿಗಳನ್ನು ಸಿಸಿಟಿವಿ ನೆರವಿನಿಂದ ಪತ್ತೆ ಹಚ್ಚಲಾಗಿತ್ತು.