ನವದೆಹಲಿ: ಓಣಂ ಹಬ್ಬವೀಗ ಅಂತರರಾಷ್ಟ್ರೀಯ ಉತ್ಸವವಾಗಿ ಬದಲಾಗಿದೆ ಎಂದುಪ್ರಧಾನಿ ನರೇಂದ್ರ ಮೋದಿ ಅವರು ‘ಮನದ ಮಾತು’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಪ್ರತಿ ತಿಂಗಳು ನಡೆಸುವ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಓಣಂ ಸಂಭ್ರಮವು ಇದೀಗ ವಿದೇಶಗಳ ದೂರದ ತೀರವನ್ನು ತಲುಪಿದೆ.ಅಮೆರಿಕ, ಯುರೋಪ್ ಅಥವಾ ಕೊಲ್ಲಿ ರಾಷ್ಟ್ರಗಳೇ ಆಗಿರಲಿ, ಓಣಂನ ಓಜಸ್ಸನ್ನುಎಲ್ಲೆಡೆ ಅನುಭವಿಸಬಹುದು. ಓಣಂ ಇದೀಗ ಅಂತರರಾಷ್ಟ್ರೀಯ ಉತ್ಸವವಾಗಿ ಹೊರಹೊಮ್ಮುತ್ತಿದೆ’ ಎಂದರು.
‘ಓಣಂ ಹಬ್ಬವನ್ನು ಸಂತೋಷ ಮತ್ತು ಉತ್ಸಾಹದಿಂದ ಚಿಂಗಂ (ಸಿಂಹ) ಮಾಸದಲ್ಲಿ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಜನರು ಒಂದಿಷ್ಟು ಹೊಸತನ್ನು ಖರೀದಿಸುತ್ತಾರೆ. ಮನೆಗಳನ್ನು ಅಲಂಕರಿಸುತ್ತಾರೆ. ಪೂಕಳಮ್ಗಾಗಿ ತಯಾರಿ ನಡೆಸುವ ಮೂಲಕ ಓಣಂ ಅನ್ನು ಸಂಭ್ರಮಿಸುತ್ತಾರೆ. ವಿವಿಧ ರೀತಿಯ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ’ ಎಂದುತಿಳಿಸಿದ್ದಾರೆ.
ನಮ್ಮ ಹಬ್ಬಗಳು ಮತ್ತು ಪ್ರಕೃತಿಯ ನಡುವೆ ನಿಕಟವಾದ ಸಂಬಂಧವಿದೆ ಎಂದಿರುವ ಮೋದಿ, ‘ಇದು ಹಬ್ಬಗಳನ್ನು ಆಚರಿಸುವ ಸಮಯ ಮತ್ತು ಅದೇರೀತಿ ಕೋವಿಡ್–19 ಸನ್ನಿವೇಶ ಇರುವುದರಿಂದ ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.