‘ಚೆನ್ನೈನಲ್ಲಿ ಕೆಲಸದ ನಿಮಿತ್ತ ಇರುವ ವ್ಯಕ್ತಿಯೊಬ್ಬರಿಗೆ ನಾವು ಅವರ ಸ್ವಂತ ಊರಾದ ಶ್ರೀನಗರಕ್ಕೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ಒತ್ತಾಯಿಸಲು ಸಾಧ್ಯವಿಲ್ಲ. ನಿಮ್ಮ ವಾದ ಹೇಗಿದೆಯೆಂದರೆ, ಆ ವ್ಯಕ್ತಿಯನ್ನು ಪೊಲೀಸರು ಹೇಗಾದರೂ ಹುಡುಕಿ, ಆತನನ್ನು ಶ್ರೀನಗರಕ್ಕೆ ಕಳುಹಿಸಬೇಕು ಎಂಬಂತಿದೆ’ ಎಂದು ಹೇಳಿದ ನ್ಯಾಯಪೀಠವು, ‘ಈ ವಿಚಾರದಲ್ಲಿ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ನಿರ್ದೇಶಕ ನೀಡಲು ಸಾಧ್ಯವಿಲ್ಲ’ ಎಂದು ಹೇಳಿತು.