‘ಲಾಕ್ಡೌನ್ ಸಂದರ್ಭದಲ್ಲಿ ಮುಂಬೈನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಕರೆತರಲು ನಾನು ಹಣ ಕಳುಹಿಸಿದ್ದೆ. ರಾಜಸ್ಥಾನದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಕರೆತರಲು ಬಸ್ ಕಳುಹಿಸಿದ್ದೆ. ನಿದ್ದೆ ಮಾಡುತ್ತಿದ್ದ ಮಕ್ಕಳನ್ನುಚಕ್ರ ಇರುವ ಸೂಟ್ಕೇಸ್ನಲ್ಲಿ ಕೂರಿಸಿಕೊಂಡು ಮಹಿಳೆಯರು ಹೇಗೆ ನಡೆದು ಬಂದಿದ್ದಾರೆ ಎಂಬುದನ್ನು ನೀವೆಲ್ಲ ನೋಡಿಲ್ಲವೇ? ಆದರೆ, ಅವರಿಗೆ (ಬಿಜೆಪಿ) ಯಾವ ಕನಿಕರವೂ ಇಲ್ಲ. ಅವರದ್ದು ಕ್ರೂರಿಗಳು ಮತ್ತು ರಕ್ಕಸರ ಪಕ್ಷ’ ಎಂದು ಮಮತಾ ಟೀಕಿಸಿದ್ದಾರೆ.