ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟ್ ಮಾಡಿ, 'ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧದ ಚುನಾವಣಾ ಹಿಂಸಾಚಾರವನ್ನು ಇಡೀ ದೇಶವೇ ನೋಡುತ್ತಿದೆ. ಈ ಹಿಂಸಾಚಾರದಲ್ಲಿ, ಮಹಿಳೆಯರು, ದಲಿತರು ಮತ್ತು ಮಕ್ಕಳ ಮೇಲೆಯೇ ಗರಿಷ್ಠ ದೌರ್ಜನ್ಯ ಎಸಗಲಾಗಿದೆ. ಮಮತಾ ಬ್ಯಾನರ್ಜಿಯ ಸರ್ವಾಧಿಕಾರಿ ಮನಸ್ಥಿತಿಯನ್ನು ಕೆಳಗುರುಳಿಸಲು ನಾವು ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತೇವೆ' ಎಂದಿದ್ದಾರೆ.