ಈ ರೋಗವು ರಾಷ್ಟ್ರದಾದ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಚುನಾವಣಾ ವ್ಯಾಪ್ತಿಯ ಪಶ್ಚಿಮ ಬಂಗಾಳವು ಈ 'ಗಂಭೀರ ಪರಿಸ್ಥಿತಿಯಿಂದ' ಹೊರತಾಗಿಲ್ಲ ಎಂದ ಚೌಧರಿ, 'ನಮ್ಮಲ್ಲಿರುವ ಯಾವುದೇ ಸಂಪನ್ಮೂಲಗಳನ್ನಾದರೂ ಈಗ ಕೋವಿಡ್ ರೋಗಿಗಳಿಗೆ ಬೆಡ್ಗಳು, ಔಷಧಿಗಳು, ಮತ್ತು ರೋಗನಿರೋಧಕಗಳ ಲಭ್ಯತೆಗೆ ಬಳಸಿಕೊಳ್ಳಬೇಕು. ಜನರ ಜೀವವೋ ಅಥವಾ ಜನ ಪ್ರತಿನಿಧಿಗಳ ಆಯ್ಕೆಯೋ ಯಾವುದು ಮುಖ್ಯವಾದುದೆಂದು ನಿರ್ಧರಿಸಿ' ಎಂದಿದ್ದಾರೆ.