ರಾಹುಲ್ ಗಾಂಧಿ ಅವರನ್ನು ಇ.ಡಿ ಅಧಿಕಾರಿಗಳು ವಿಚಾರಿಸುತ್ತಿರುವ ಘಟನೆಗೆ ಸಂಬಂಧಿಸಿದಂತೆ ಅಖಿಲೇಶ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ, ‘ಇ.ಡಿ ಎಂದರೆ ಪ್ರಜಾಪ್ರಭುತ್ವದಲ್ಲಿನ ಪರೀಕ್ಷೆ. ಯಾವಾಗ ಸರ್ಕಾರವು ಆಡಳಿತದಲ್ಲಿ ವಿಫಲವಾಗುತ್ತದೆಯೋ, ಆಗೆಲ್ಲ ಈ ಪರೀಕ್ಷೆಯನ್ನು ಘೋಷಿಸುತ್ತದೆ. ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿದವರು ಓದು, ಬರಹ ಅಥವಾ ಮೌಖಿಕ ಪರೀಕ್ಷೆಗೆ ಹೆದರುವುದಿಲ್ಲ. ನೀವು ಯಾವತ್ತೂ ಹೆದರಬೇಡಿ’ ಎಂದು ರಾಹುಲ್ ಅವರಿಗೆ ಅಖಿಲೇಶ್ ತಿಳಿಸಿದ್ದಾರೆ.