‘ಕೇವಲ 18 ದಿನಗಳಲ್ಲಿ ಕೋವಿಡ್ ಪರಿಸ್ಥಿತಿಯಿಂದ (2020ರಲ್ಲಿ) ಹೊರಬರಬಹುದು ಎಂದು ಸಲಹೆ ನೀಡಿದ ಪಕ್ಷ ನಮ್ಮದಲ್ಲ. ‘ಸಭ್ಯ’ರೊಬ್ಬರು ನಾವು ಕೇವಲ 18 ದಿನಗಳಲ್ಲಿ ಕೋವಿಡ್ ವಿರುದ್ಧ ಜಯ ಗಳಿಸಬಹುದು ಎಂದು ಹೇಳಿದ್ದರು. ಕೊರೊನಾ ವಿರುದ್ಧ ಹೋರಾಡಲು ಮನೆಯ ಬಾಲ್ಕನಿಯಲ್ಲಿ ದೀಪ ಹಚ್ಚಿ ಎಂದು ಕರೆ ಕೊಟ್ಟಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.