ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ? ರಾಹುಲ್‌ ಪ್ರಶ್ನೆ

Last Updated 1 ಆಗಸ್ಟ್ 2022, 7:28 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಮಾದಕ ವಸ್ತುಗಳು ನಿರಂತರವಾಗಿ ಪತ್ತೆಯಾಗುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ ಗುಜರಾತ್‌ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ.

‘ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಸೆಪ್ಟೆಂಬರ್ 21ರಂದು 3,000 ಕೆ.ಜಿ (₹ 21,000ಕೋಟಿ), ಮೇ 22 ರಂದು 56 ಕೆ.ಜಿ (₹ 500 ಕೋಟಿ), ಜುಲೈ 22ರಂದು 75 ಕೆ.ಜಿ (₹ 375 ಕೋಟಿ) ಮಾದಕ ವಸ್ತು ಪತ್ತೆಯಾಗಿದೆ. ಡ್ರಗ್ಸ್- ಮದ್ಯ ಮಾಫಿಯಾಕ್ಕೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವ ಡಬಲ್ ಇಂಜಿನ್ ಸರ್ಕಾರದಲ್ಲಿ ಕುಳಿತಿರುವವರು ಯಾರು? ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

‘ನನ್ನ ಪ್ರಶ್ನೆಗಳು: 1. ಒಂದೇ ಬಂದರಿನಲ್ಲಿ 3 ಬಾರಿ ಡ್ರಗ್ಸ್ ವಶಪಡಿಸಿಕೊಂಡರೂ, ನಿರಂತರವಾಗಿ ಅದೇ ಬಂದರಿಗೆ ಡ್ರಗ್ಸ್‌ ಹೇಗೆ ಬರುತ್ತಿದೆ? 2. ಗುಜರಾತ್‌ನಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಮಾಫಿಯಾಕ್ಕೆ ಕಾನೂನಿನ ಭಯವಿಲ್ಲವೇ? ಅಥವಾ ಇದು ಮಾಫಿಯಾ ಸರ್ಕಾರವೇ?’ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT