2020 ಮೇ 27ರಂದು ಸಲ್ಲಿಕೆಯಾದ ಅಧ್ಯಯನ ವರದಿಯಲ್ಲಿ ಆಲಮಟ್ಟಿ ಜಲಾಶಯ ಎತ್ತರಿಸುವುದರಿಂದ ಮಹಾರಾಷ್ಟ್ರದ ಎರಡು ಜಿಲ್ಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಸಂಭವಿಸುವುದಿಲ್ಲ ಎಂದಿತ್ತು. ಆದರೆ ಸೆಪ್ಟೆಂಬರ್ 2021ರಂದು ವಡ್ನೆರಾ ಅವರು ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರಬರೆದು, ಅಧ್ಯಯನದ ಸಂದರ್ಭ ಕರ್ನಾಟಕವು ಚೆಕ್ ಡ್ಯಾಂಗಳನ್ನು ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಇದರಿಂದ ಸಾಂಗ್ಲಿ ಮತ್ತು ಕೊಲ್ಹಾಪುರದಲ್ಲಿ ಪ್ರವಾಹ ಸಂಭವಿಸಬಹುದು ಎಂದಿದ್ದರು.