ಭಾನುವಾರ ಉಜ್ಜೈನಿಯ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿ ಸ್ಥಳೀಯ ಯೂಟ್ಯೂಬ್ ಚಾನೆಲ್ವೊಂದರ ಜತೆ ಮಾತನಾಡಿದ ಅವರು, ‘ನನಗೆ ರಾಜಕೀಯ ಅರ್ಥವಾಗುತ್ತದೆ. ಜನರು ತಮ್ಮನ್ನು ನಾನು ಪ್ರತಿನಿಧಿಸಬೇಕು ಎಂದು ಬಯಸಿದಲ್ಲಿ, ನಾನು ಜನರಿಗಾಗಿ ಏನಾದರೂ ಬದಲಾವಣೆ ಮಾಡಲು ಅವಕಾಶವಿದೆ ಎಂದಾದಲ್ಲಿ, ರಾಜಕೀಯಕ್ಕೆ ಪ್ರವೇಶಿಸುತ್ತೇನೆ' ಎಂದು ಹೇಳಿದರು.