ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಜಗತ್ತಿನೆದುರು ಕಾಣಿಸಿಕೊಳ್ಳುತ್ತೇನೆ: ಅಮೃತಪಾಲ್

Last Updated 31 ಮಾರ್ಚ್ 2023, 3:04 IST
ಅಕ್ಷರ ಗಾತ್ರ

ಚಂಡೀಗಡ: ನಾನು ಪಲಾಯನವಾದಿ ಅಲ್ಲ. ಜಗತ್ತಿನ ಮುಂದೆ ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತೇನೆ ಎಂದು ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಮತ್ತೊಂದು ವಿಡಿಯೊದಲ್ಲಿ ಹೇಳಿದ್ದಾರೆ.

ನಾನು ಪರಾರಿಯಾಗಿದ್ದೇನೆ. ನನ್ನ ಸಹಚರರನ್ನು ತೊರೆದಿದ್ದೇನೆ ಎಂದು ಭಾವಿಸುವವರು ಭ್ರಮೆಯಲ್ಲಿ ಇರುತ್ತಾರೆ. ನಾನು ಸಾವಿಗೆ ಹೆದರುವುದಿಲ್ಲ ಎಂದು ಪಂಜಾಬ್ ಭಾಷೆಯಲ್ಲಿ ತಿಳಿಸಿದ್ದಾರೆ.

ನಾನು ಹಿಂದೆಯೂ ಹೆದರಿಲ್ಲ. ಇನ್ನೂ ಮುಂದೆಯೂ ಹೆದರುವುದಿಲ್ಲ ಎಂದು ಸರ್ಕಾರಕ್ಕೆ ಹೇಳಲು ಬಯಸುತ್ತೇನೆ. ಅವರು ಏನೂ ಬೇಕಾದರೂ ಮಾಡಬಹುದು. ಆದರೆ ತಲೆಮರೆಸಿಕೊಳ್ಳುವ ಬಗ್ಗೆ ನಾನು ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ.

ಸಿಖ್ ಧರ್ಮಕ್ಕೆ ಸೇರಿದ ಎಲ್ಲರೂ ಒಗ್ಗೂಡುವ ಸಮಯವಿದು. ಸಿಖ್ ಸಂಘಟನೆಗಳಲ್ಲಿ ಏಕತೆ ಕಾಪಾಡುವಂತೆ ಜಾತೇದಾರ್‌ಗೆ (ಸಂಘಟನೆಯ ಮುಖ್ಯಸ್ಥರು) ಕರೆ ನೀಡಿದ್ದಾರೆ.

ಹಿಂದೆ ಮಾಡಿದಂತೆ ಈಗಲೂ ರಾಜಕೀಯ ಮುಂದುವರಿಸಿ ಜಾತೇದಾರ್ ಆಗುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT