‘ಯುದ್ಧ, ವಾಯುಮಾಲಿನ್ಯದ ವಿರುದ್ಧ’ ಹೆಸರಿನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಹಾಗೂ ವಾಯುಮಾಲಿನ್ಯ ಎರಡೂ ಶ್ವಾಸಕೋಶಕ್ಕೆ ಹಾನಿ ಉಂಟುಮಾಡುತ್ತವೆ. ‘ಗ್ರೀನ್ ದೆಹಲಿ’ ಹೆಸರಿನ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಮೂಲಕ ಎಲ್ಲೆಲ್ಲಿ ತ್ಯಾಜ್ಯವನ್ನು ಸುಡಲಾಗುತ್ತಿದೆ, ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯವನ್ನು ಜನರು ಸರ್ಕಾರದ ಗಮನಕ್ಕೆ ತರಬಹುದು. ಈ ದೂರುಗಳನ್ನು ಪರಿಹರಿಸಲು ನಿಗದಿತ ಸಮಯವನ್ನೂ ಸೂಚಿಸಲಾಗುವುದು. ಇದನ್ನು ನಾನೇ ನಿತ್ಯವೂ ಪರಿಶೀಲಿಸುತ್ತಿರುತ್ತೇನೆ’ ಎಂದರು.