‘ದೂರು ನೀಡಿದ ಮಹಿಳೆಯ ಸಹೋದರಿಯ ಜೊತೆ ನನಗೆ ಸಂಬಂಧವಿದ್ದ ಕುರಿತು ನನ್ನ ಪತ್ನಿ, ಕುಟುಂಬ ಹಾಗೂ ಸ್ನೇಹಿತರಿಗೆ ತಿಳಿದಿದೆ. ಇಬ್ಬರು ಮಕ್ಕಳನ್ನೂ ನಮ್ಮ ಕುಟುಂಬ ಒಪ್ಪಿದೆ. ನಾನು ಸಂಬಂಧವಿಟ್ಟುಕೊಂಡಿದ್ದ ಮಹಿಳೆಯು 2019ರಿಂದ ನನಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಈ ಕುರಿತು ಹಿಂದೆಯೇ ದೂರು ನೀಡಿದ್ದೇನೆ. ನನ್ನ ವಿರುದ್ಧ ಮಾನನಷ್ಟ ವಿಷಯಗಳನ್ನು ಪಸರಿಸದಂತೆ ತಡೆ ನೀಡಲು ಕೋರಿ ಬಾಂಬೆ ಹೈಕೋರ್ಟ್ಗೂ ಅರ್ಜಿ ಸಲ್ಲಿಸಿದ್ದೇನೆ’ ಎಂದು ಪ್ರಕಟಣೆಯಲ್ಲಿ ಧನಂಜಯ್ ತಿಳಿಸಿದ್ದಾರೆ.