‘ಶೂಗಳಿಂದ ಪಾರ್ಥ ಅವರಿಗೆ ಹೊಡೆಯಬೇಕೆಂದು ಆಸ್ಪತ್ರೆ ಬಳಿ ಬಂದಿದ್ದೆ. ಕೋಲ್ಕತ್ತದ ವಿವಿಧೆಡೆ ವಸತಿ ಸಮುಚ್ಚಯಗಳನ್ನು ನಿರ್ಮಿಸಿರುವ ಅವರು ಅಲ್ಲಿ ಕೋಟ್ಯಂತರ ರೂಪಾಯಿ ಬಚ್ಚಿಟ್ಟಿದ್ದಾರೆ. ಲಕ್ಷಾಂತರ ಜನ ಉದ್ಯೋಗವಿಲ್ಲದೆ ಬೀದಿ ಬೀದಿ ಅಲೆಯುತ್ತಿರುವಾಗ, ಜನರನ್ನು ವಂಚಿಸಿರುವ ಅವರು ಈಗಲೂ ಎ.ಸಿ.ಕಾರಿನಲ್ಲೇ ಓಡಾಡುತ್ತಿದ್ದಾರೆ. ಇಂತಹವರನ್ನು ಹಗ್ಗ ಕಟ್ಟಿ ಬೀದಿಯಲ್ಲಿ ಎಳೆದಾಡಬೇಕು’ ಎಂದು ಅಮತಲದ ನಿವಾಸಿಯಾಗಿರುವ ಶುಭ್ರ ಘೊರುಯಿ ಕಿಡಿಕಾರಿದ್ದಾರೆ.