ಲಖನೌ: ಮತದಾರರು ತಪ್ಪು ಮಾಡಿದರೆ, ಉತ್ತರ ಪ್ರದೇಶವು ಮತ್ತೊಂದು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳವಾಗಿ ಬದಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
403 ಸದಸ್ಯ ಬಲದ ಉತ್ತರ ಪ್ರದೇಶ ಚುನಾವಣೆಗೆ ಇಂದು (ಫೆ.10) ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿರುವವಿಡಿಯೊವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಯೋಗಿ, 'ಎಚ್ಚರ, ನೀವು ಮೈಮರೆತರೆ, ಈ ಐದು ವರ್ಷಗಳ ದುಡಿಮೆಯು ವ್ಯರ್ಥವಾಗುತ್ತದೆ. ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಬಂಗಾಳವಾಗಿ ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.
उत्तर प्रदेश के मेरे मतदाता भाइयों एवं बहनों... pic.twitter.com/voB37uA3uV
— Yogi Adityanath (@myogiadityanath) February 9, 2022
ಮುಂದುವರಿದು,ಬಿಜೆಪಿ ಅಧಿಕಾರಕ್ಕೆ ಬಂದರೆ 'ಭಯ ಮುಕ್ತ ಜೀವನ' ಖಾತ್ರಿಯಾಗಲಿದೆ ಎಂದು ಭರವಸೆ ನೀಡಿರುವ ಅವರು, 'ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ.ಬಿಜೆಪಿಯ ಡಬಲ್ ಎಂಜಿನ್ (ಕೇಂದ್ರ ಮತ್ತು ರಾಜ್ಯದಲ್ಲಿ) ಸರ್ಕಾರವುಕಳೆದ ಐದು ವರ್ಷಗಳಲ್ಲಿ ಸಮರ್ಪಣಾಭಾವ ಮತ್ತು ಬದ್ಧತೆಯಿಂದ ಎಲ್ಲ ಕಾರ್ಯಗಳನ್ನೂ ಮಾಡಿದೆ. ಅವೆಲ್ಲವನ್ನೂ ನೀವುನೋಡಿದ್ದೀರಿ ಮತ್ತು ವಿವರವಾಗಿ ಕೇಳಿದ್ದೀರಿ' ಎಂದಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳು ಮತ್ತು ಯೋಜನೆಗಳ ಕುರಿತಾಗಿಯೂ ಸರಣಿ ಟ್ವೀಟ್ಗಳನ್ನು ಮಾಡಿರುವ ಯೋಗಿ, ಮತ್ತೊಮ್ಮೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದ ಪಶ್ಚಿಮ ಭಾಗದ 11 ಜಿಲ್ಲೆಗಳ ಒಟ್ಟು 58 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.
वृद्धों, निराश्रित महिलाओं व दिव्यांगजन की पेंशन को भाजपा सरकार ने प्रति वर्ष ₹12,000 कर दिया है।
— Yogi Adityanath (@myogiadityanath) February 10, 2022
भाजपा ने यह भी सुनिश्चित किया है हर पात्र व्यक्ति को इसका लाभ मिले।
सहारनपुर में इन पेंशन लाभार्थियों की संख्या में क्रमश: 64.4%, 92% व 45.06% की वृद्धि इस बात का प्रमाण है।
भाजपा सरकार के लिए 'लोक-कल्याण' ही प्रतिज्ञा है।
— Yogi Adityanath (@myogiadityanath) February 10, 2022
उसी का सुफल है कि विगत 05 वर्ष में सहारनपुर में 29702 निर्धनों के 'अपना घर' का सपना पूरा हुआ है। वहीं 3,18,000 लोग आयुष्मान योजना के द्वारा ₹05 लाख तक मुफ्त चिकित्सा सुविधा का लाभ प्राप्त कर सकते हैं।
'अंत्योदय' हो रहा है...
डबल इंजन की भाजपा सरकार ने पहली कैबिनेट में पूरे प्रदेश के लघु एवं सीमांत किसानों का ₹36 हजार करोड़ का कर्ज माफ किया था।
— Yogi Adityanath (@myogiadityanath) February 10, 2022
इसके अंतर्गत जनपद सहारनपुर के 74,392 अन्नदाता किसानों को ₹503.32 करोड़ राशि का ऋण मोचन लाभ प्राप्त हुआ है।
किसानों की सुविधा हमारी शीर्ष प्राथमिकता है...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.