ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ' ನಾನು ಗಾಯಗೊಂಡ ನಂತರ ಮನೆಗೆ ಸೀಮಿತವಾಗಬಹುದೆಂದು ಕೆಲವರು ಭಾವಿಸಿದ್ದರು. ಆದರೆ, ಜನರ ನೋವು ನನ್ನ ನೋವಿಗಿಂತ ದೊಡ್ಡದಾಗಿದೆ. ಆ ಕಾರಣ, ನಾನು ಜನರ ನಡುವೆಯೇ ಇರಲು ನಿರ್ಧರಿಸಿದ್ದೇನೆ' ಎಂದು ತಿಳಿಸಿದ್ದಾರೆ.