ಕೋಟಾ (ರಾಜಸ್ಥಾನ):ಕಬ್ಬಿಣದ ರಾಡ್ ಹಾಗೂ ಇತರ ಮಾರಕಾಸ್ತ್ರಗಳೊಂದಿಗೆಇಲ್ಲಿನ ಗುಮಾನ್ಪುರ ಪ್ರದೇಶದಲ್ಲಿನ ಮನೆಯೊಂದಕ್ಕೆ ನುಗ್ಗಿದ 10 ಮಂದಿ ಕಿಡಿಗೇಡಿಗಳು,24 ವರ್ಷದ ಯುವಕನೊಬ್ಬನನ್ನು ಹತ್ಯೆ ಮಾಡಿದ್ದಾರೆ. ಯುವಕನ ರಕ್ಷಣೆಗೆ ಧಾವಿಸಿದ ಕುಟುಂಬದ ಇನ್ನೂ ಮೂವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ಯುವಕನನ್ನುಭೋಯ್ ಮೊಹಲ್ಲಾದ ನಿವಾಸಿ ಹಾಗೂ ದಿನಗೂಲಿ ಕಾರ್ಮಿಕ ರಾಕೇಶ್ ಬಂಜಾರ(24) ಎಂದು ಗುರುತಿಸಲಾಗಿದೆ.
ಬಂಜಾರ ಬುಧವಾರ ರಾತ್ರಿಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ, ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಗೋಲು ಮತ್ತು ಅಮನ್ ಅವರೊಂದಿಗೆ ಜಗಳವಾಡಿದ್ದರು. ಆ ವೇಳೆ ಇಬ್ಬರಿಗೂ (ಗೋಲು ಮತ್ತು ಅಮನ್ಗೆ) ಹೊಡೆದಿದ್ದರು ಎಂದು ಗುಮಾನ್ಪುರದಸರ್ಕಲ್ ಇನ್ಸ್ಪೆಕ್ಟರ್ ಲಖನ್ ಲಾಲ್ ಹೇಳಿದ್ದಾರೆ.
ಅದಾದ ನಂತರ, ಇತರ ಎಂಟು ಮಂದಿಯೊಂದಿಗೆ ಮಧ್ಯರಾತ್ರಿ 1ರ ವೇಳೆಗೆ ಬಂಜಾರ ಮನೆಗೆ ನುಗ್ಗಿದ ಮುಖ್ಯ ಆರೋಪಿಗಳು (ಗೋಲು ಮತ್ತು ಅಮನ್), ಬಂಜಾರ ಹಾಗೂ ಆತನ ಕುಟುಂಬದವರ ಮೇಲೆ ದಾಳಿ ನಡೆಸಿದ್ದಾರೆ.ಗಂಭೀರವಾಗಿ ಗಾಯಗೊಂಡಿದ್ದ ಬಂಜಾರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮೃತಪಟ್ಟಿದ್ದಾರೆ. ಬಂಜಾರ ಅವರ ರಕ್ಷಣೆಗೆ ಧಾವಿಸಿದ ಕುಟುಂಬದ ಮೂವರ ಮೇಲೆ ಹಲ್ಲೆ ನಡೆಸಲಾಗಿದೆಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ, ಅಮನ್, ಗೋಲು, ಲಕ್ಕಿ ಫೆಫ್ಡಾ, ಬಚ್ಚಾ, ಬಿಜ್ಲಿ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಮರೋಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದೂಲಾಲ್ ತಿಳಿಸಿದ್ದಾರೆ.