ಲಖನೌ: ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಕಚೇರಿಯಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ಕಾಂಗ್ರೆಸ್ ಮುಖಂಡ ಕನ್ಹಯ್ಯಕುಮಾರ್ ಮೇಲೆ ರಾಸಾಯನಿಕ ಎರಚಲು ಯತ್ನಿಸಿದ್ದಾನೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆತ ಯಾವುದೇ ಹಾನಿ ಎಸಗುವ ಮುನ್ನವೇ ಪಕ್ಷದ ಪದಾಧಿಕಾರಿಗಳ ಕೈಗೆ ಸಿಕಿಬಿದ್ದಿದ್ದಾನೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಅಂಗವಾಗಿ ಯುಪಿಸಿಸಿ ಕಚೇರಿಯಲ್ಲಿ ಪಕ್ಷವು ಆಯೋಜಿಸಿದ್ದ 'ಯುವ ಸಂಸದ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ಕನ್ಹಯ್ಯಆಗಮಿಸಿದ್ದರು.
ರಾಸಾಯನಿಕ ಎರಚಲು ಯತ್ನಿಸಿದ ಯುವಕನನ್ನು ದೇವಾಂಶ್ ಬಾಜ್ಪೇಯಿ ಎಂದು ಗುರುತಿಸಲಾಗಿದೆ.