ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಬಿತ್ತಿದಂತೆ ಬೆಳೆ ಬರುತ್ತದೆ. ಅದೇ ರೀತಿಯಲ್ಲಿ ಆ ಪಕ್ಷದಲ್ಲಿಯೂ ನಡೆದಿದೆ.ಚಿರಾಗ್ ಇನ್ನೂ ಯುವಕ. ಎನ್ಡಿಎ ಜತೆಗಿದ್ದ ಪಕ್ಷದ ನಾಯಕತ್ವವನ್ನು ಚಿರಾಗ್ ಪಾಸ್ವಾನ್ ವಹಿಸಿದ್ದರು. ಆದರೂ, ಅವರು ವಿಭಿನ್ನ ನಿಲುವು ಕೈಗೊಂಡರು. ಇದರಿಂದ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟವಾಯಿತು. ಆಂತರಿಕವಾಗಿ ಪಕ್ಷದಲ್ಲೇ ಅಸಮಾಧಾನ ಸೃಷ್ಟಿಯಾಯಿತು’ ಎಂದು ವಿಶ್ಲೇಷಿಸಿದ್ದಾರೆ.