ಮಹಾವಿಷ್ಣುವಿನ ಒಂದು ರೂಪವನ್ನು ಈ ವ್ರತದಲ್ಲಿ ಪೂಜಿಸಲಾಗುತ್ತದೆ. ಅನಂತ ಎಂದರೆ ಭಗವಂತನ ತತ್ತ್ವಕ್ಕೂ ಸಂಕೇತವಾಗುತ್ತದೆ. ಅವನು ಏಳು ಹೆಡೆಗಳ ಹವಿನ ಮೇಲೆ ಮಲಗಿದ್ದಾನೆ ಎನ್ನುವುದನ್ನೂ ಸೂಚಿಸುತ್ತದೆ. ವಿಷ್ಣು, ಅಗ್ನಿ, ಸೂರ್ಯ, ಇಂದ್ರ, ಬ್ರಹ್ಮ, ವಾಯು, ಶಿವ, ಗಣೇಶ, ಸುಬ್ರಹ್ಮಣ್ಯ, ಚಂದ್ರ, ಆಕಾಶ, ವರುಣ, ಪೃಥ್ವಿ ಮತ್ತು ವಸುಗಳು – ಈ ತತ್ತ್ವಗಳನ್ನು ಆಹ್ವಾನಿಸಿ ದೋರಗ್ರಂಥಗಳನ್ನು ಪೂಜಿಸಲಾಗುತ್ತದೆ. ಇದು ವಿಷ್ಣುವಿನ ಅನಂತತತ್ತ್ವಕ್ಕೂ ವಿಶ್ವರೂಪತತ್ತ್ವಕ್ಕೂ ಸಂಕೇತ. ಕೇರಳದ ತಿರುವನಂತಪುರದಲ್ಲಿ ಅನಂತಪದ್ಮನಾಭನ ಮೂರ್ತಿಯನ್ನು ನೋಡಬಹುದು.