ನಾಟಕ ರಚನೆ, ಅಭಿನಯ ಹಾಗೂ ನಿರ್ದೇಶನದ ಮೂಲಕ ಹೆಸರು ಪಡೆದಿರುವ ನಿವೃತ್ತ ಶಿಕ್ಷಕ ವೀರನಗೌಡ ದಳವಾಯಿ, ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಡಾ.ಮಲ್ಲೇಶ ಹುಲ್ಮನಿ, ಶಿಲ್ಪಕಲೆಯಲ್ಲಿ ಹೆಸರು ಪಡೆದ ದಿವಂಗತ ಮಾದೇವಪ್ಪ ಮಾಯಾಚಾರಿ, ನಾಗಲಿಂಗಪ್ಪ ಮಾಯಾಚಾರಿ ಗ್ರಾಮಕ್ಕೆ ಹೆಮ್ಮೆ ತಂದವರು. ಜತೆಗೆ ಗ್ರಾಮವು ಹತ್ತಾರು ಸೈನಿಕರನ್ನು ದೇಶಕ್ಕೆ ಕೊಡುಗೆ ನೀಡಿದೆ.