ಅತಿವೃಷ್ಟಿ ಮತ್ತು ಪ್ರವಾಹದ ಕುರಿತು ಸದನದಲ್ಲಿ ನಡೆದಿದ್ದ ಚರ್ಚೆಗೆ ಉತ್ತರಿಸಿದ ಅವರು, ‘ಈವರೆಗೆ 134 ಮಂದಿ ಮೃತಪಟ್ಟಿದ್ದಾರೆ.
ಬೆಳೆಹಾನಿ, ಜಾನುವಾರುಗಳ ಸಾವು, ಮನೆ ಕುಸಿತಸೇರಿ ₹ 7,381.45 ಕೋಟಿ ನಷ್ಟವಾಗಿದೆ. ರಸ್ತೆ,ಸೇತುವೆಗಳಿಗೆ ಆಗಿರುವ ಹಾನಿ, ಕೆರೆಗಳು ಒಡೆದಿರುವುದು, ಶಾಲೆ, ಅಂಗನವಾಡಿಗಳು, ಸರ್ಕಾರಿ ಕಚೇರಿಗಳ ಕಟ್ಟಡ ಕುಸಿತ ಸೇರಿದಂತೆ ಮೂಲಸೌಕರ್ಯಗಳಿಗೆ ₹ 4,662.84 ಕೋಟಿ ನಷ್ಟವಾಗಿದೆ’ ಎಂದರು.