ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ318 ಹೆಕ್ಟೇರ್ ಅರಣ್ಯ ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಬಹುತೇಕ ಪ್ರಸ್ತಾವನೆಗಳು ಗಣಿಗಾರಿಕೆಗೆ ಸಂಬಂಧಪಟ್ಟವು. ಉತ್ತರ ಕನ್ನಡದಲ್ಲಿ 171 ಹೆಕ್ಟೇರ್, ಚಿಕ್ಕಮಗಳೂರಿನಲ್ಲಿ 108 ಹೆಕ್ಟೇರ್, ತುಮಕೂರಿನಲ್ಲಿ 41 ಹೆಕ್ಟೇರ್, ರಾಮನಗರದಲ್ಲಿ 23 ಹೆಕ್ಟೇರ್, ರಾಯಚೂರಿನಲ್ಲಿ 15 ಹೆಕ್ಟೇರ್, ಬಾಗಲಕೋಟೆಯಲ್ಲಿ 12 ಹೆಕ್ಟೇರ್ ಅರಣ್ಯ ಬಳಕೆಗೆ ಅನುಮೋದನೆ ನೀಡಲಾಗಿದೆ. ಗಣಿಗಾರಿಕೆ, ನಾಲೆಗಳ ನಿರ್ಮಾಣ, ರಸ್ತೆ, ವಿದ್ಯುತ್ ಮಾರ್ಗ ಮತ್ತಿತರ ಯೋಜನೆಗಳಿಗೆ ಈ ಅರಣ್ಯ ಪ್ರದೇಶಗಳನ್ನು ಬಳಸಿಕೊಳ್ಳಲಾಗಿದೆ.