ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊನೆಯ ಗಡುವಿನೊಳಗೆ ಮೀಸಲಾತಿ ಘೋಷಣೆ ಮಾಡುವ ವಿಶ್ವಾಸವಿದ್ದು, ಈ ಸಂಬಂಧ ಏಪ್ರಿಲ್ 21ರಂದು ಕೂಡಲಸಂಗಮದಲ್ಲಿ ಮುಖ್ಯಮಂತ್ರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿ, ರೇಷ್ಮೆ ರುಮಾಲು ಸುತ್ತಿ, ಕರದಂಟು ತಿನ್ನಿಸುತ್ತೇವೆ. ಇಲ್ಲವಾದರೆ ಅಂದೇ ಮರು ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.