‘ಶಿಗ್ಗಾವಿ ಕ್ಷೇತ್ರದ ಪಂಚಮಸಾಲಿ ಸಮಾಜದವರು ಬೊಮ್ಮಾಯಿ ನಂಬಿಕಸ್ಥರು ಅಲ್ಲ ಎಂದಿದ್ದರು. ಆದರೂ ನಾವು ನಿಮ್ಮ ಮೇಲೆ ನಂಬಿಕೆ ಇಟ್ಟೆದ್ದೆವು. ರಾಣಿ ಚನ್ನಮ್ಮನ ಜಯಂತಿ ದಿನದಿಂದ ನೀವು ಕಣ್ಣೀರು ಹಾಕಿ, ‘ನಮಗೆ ರೊಟ್ಟಿ ಕೊಟ್ಟಿದ್ದಿರಿ, ನಿಮ್ಮನ್ನು ನಾನು ಕೈ ಬಿಡೋದಿಲ್ಲ’ಎಂದು ಹೇಳಿದ್ದೀರಿ. ಈಗ ಮೀಸಲಾತಿ ನೀಡಲು ನಿಮಗೆ ಯಾಕೆ ಸಾಧ್ಯವಾಗುತ್ತಿಲ್ಲ? ಮೊದಲು ಸಮಾಜದ ಬಡ ಮಕ್ಕಳ ಕಣ್ಣೀರು ಒರೆಸುವ ಕೆಲಸ ಮಾಡಿ. ಯಾರದ್ದೋ ಮಾತು ಕೇಳಿ, ಮೀಸಲಾತಿ ನೀಡುವ ವಿಚಾರದಲ್ಲಿ ಹಿಂದೇಟು ಹಾಕಬೇಡಿ’ಎಂದು ವಿನಂತಿಸಿದರು.