‘ಉಪ್ಪಾರಪೇಟೆಯಲ್ಲಿದ್ದ 20, ಕೆ.ಆರ್.ಮಾರುಕಟ್ಟೆ ಪ್ರದೇಶದಲ್ಲಿದ್ದ 6, ಬ್ಯಾಟರಾಯನಪುರ, ಚಂದ್ರಾ ಲೇಔಟ್ ಹಾಗೂ ಕೆಂಗೇರಿಯಲ್ಲಿದ್ದ ತಲಾ ಮೂವರು ಹಾಗೂ ವಿಜಯನಗರದಲ್ಲಿದ್ದ ಇಬ್ಬರು ಭಿಕ್ಷುಕರನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ, ಅಣ್ಣಮ್ಮನ ದೇವಸ್ಥಾನದ ಸುತ್ತಮುತ್ತ ಗುರುವಾರವೂ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.