ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬದವರನ್ನು ಗುರುತಿಸಿ, ಅವರ ಮನೆಗೆ ಭೇಟಿ ಕೊಟ್ಟು ಅವರು ಮಾಡಿದ ಸೇವೆಯನ್ನು ಸ್ಮರಿಸುವುದು ಅಭಿಯಾನದ ಉದ್ದೇಶ. ಅಲ್ಲದೆ, ತಾಲ್ಲೂಕು, ಜಿಲ್ಲೆಯ ಮೂವರು ಸಾಹಿತಿಗಳು 'ನಮ್ಮ ಜಿಲ್ಲೆ/ ತಾಲ್ಲೂಕಿನ ಸ್ವಾತಂತ್ರ್ಯ ಕಲಿಗಳು' ಎನ್ನುವ ವಿಷಯದ ಮೇಲೆ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಿದ್ದಾರೆ.