ಬಾಬುರೆಡ್ಡಿ ಅವರಿಗೆ ಸೇರಿದ 15 ಮದ್ಯದಂಗಡಿಗಳು ಜಿಲ್ಲೆಯಲ್ಲಿವೆ. ಇವುಗಳ ವಾರ್ಷಿಕ ನವೀಕರಣಕ್ಕೆ ಪ್ರತಿ ಅಂಗಡಿಗೆ ₹ 36 ಸಾವಿರದಂತೆ ₹ 5.4 ಲಕ್ಷಕ್ಕೆ ಉಪ ಆಯುಕ್ತ ನಾಗಶಯನ ಬೇಡಿಕೆ ಇಟ್ಟಿದ್ದರು. ಇದರಲ್ಲಿ ₹ 3.92 ಲಕ್ಷವನ್ನು ಬಾಬುರೆಡ್ಡಿ ನೀಡಿದ್ದರು. ಉಳಿಕೆ ₹ 1.48 ಲಕ್ಷ ಹಾಗೂ ಪ್ರತಿ ಮದ್ಯದಂಗಡಿಯ ಮಾಸಿಕ ಲಂಚದ ಉಳಿಕೆ ಮೊತ್ತ ₹ 1.8 ಲಕ್ಷವನ್ನು ನೀಡುವಂತೆ ಪೀಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.