ಹೊಸಪೇಟೆ/ಕೂಡ್ಲಿಗಿ: ಹೊಸಪೇಟೆ ಉಪ ನೋಂದಣಾಧಿಕಾರಿ ಪ್ರಭಾಕರ ಮಠದ ಅವರ ಮನೆ, ಕಚೇರಿ, ಕೂಡ್ಲಿಗಿಯಲ್ಲಿರುವ ಅವರ ಸೋದರ ಮಾವನ ಮನೆ ಸೇರಿದಂತೆ ಮೂರು ಕಡೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ನಗರದ ತಾಲ್ಲೂಕು ಕಚೇರಿಯಲ್ಲಿನ ಉಪ ನೋಂದಣಾಧಿಕಾರಿ ಕಚೇರಿ, ಬಸವೇಶ್ವರ ಬಡಾವಣೆಯಲ್ಲಿನ ಪ್ರಭಾಕರ ಅವರ ಮನೆ ಹಾಗೂ ಕೂಡ್ಲಿಗಿಯಲ್ಲಿನ ಅವರ ಮಾವನ ಮನೆ ಮೇಲೆ ಎಸಿಬಿ ಎಸ್ಪಿ ಗುರುನಾಥ ಬಿ.ಮತ್ತೂರ ನೇತೃತ್ವದ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿವೆ.
ಅಕ್ರಮ ಆಸ್ತಿ ಗಳಿಕೆ ಹಾಗೂ ಆಸ್ತಿ ನೋಂದಣಿಯಲ್ಲಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.