ಅಪಘಾತ ನಡೆದ ಸ್ಥಳವು ತಮಿಳುನಾಡಿನ ಅಂಚಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದರಿಂದ ಅಲ್ಲಿಯೇ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಅಂಚಟ್ಟಿ ಪೊಲೀಸರು ಸ್ಥಳಕ್ಕೆಬಂದು ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ತಮಿಳುನಾಡಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಆದರೆ ಕರ್ನಾಟಕದಲ್ಲೇ ಶವ ಕೊಂಡೊಯ್ಯಲು ಮೃತರ ಸಂಬಂಧಿಕರು ಒತ್ತಾಯಿಸಿದರು. ಇದಕ್ಕೆ ಗಡಿ ಸಮಸ್ಯೆ ಎದುರಾಯಿತು.