ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ್ದ ಲಾಂಛನದ ಬಾಯಿ ತೆರೆದಿದೆ: ಜಗ್ಗೇಶ್

Last Updated 13 ಜುಲೈ 2022, 15:22 IST
ಅಕ್ಷರ ಗಾತ್ರ

ತುಮಕೂರು: ‘ಈವರೆಗೆ ರಾಷ್ಟ್ರ ಲಾಂಛನದಲ್ಲಿರುವ ಸಿಂಹ ಬಾಯಿ ಮುಚ್ಚಿಕೊಂಡಿತ್ತು. ಈಗ ಬಾಯಿ ತೆರೆದಿದೆ’ ಎಂದು ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ್ ಅವರು ನೂತನ ಲಾಂಛನವನ್ನು ಟೀಕಿಸುವವರಿಗೆ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಸ್ತು ಸಂಗ್ರಹಾಲಯದಲ್ಲಿ ಇರುವ ರಾಷ್ಟ್ರ ಲಾಂಛನ ನೋಡಬೇಕು. ಅದರ ಯಥಾವತ್ ನಿರ್ಮಾಣ ಮಾಡಿ ನೂತನ ಸಂಸತ್ ಕಟ್ಟಡದ ಮೇಲೆ ಅನಾವರಣ ಮಾಡಲಾಗಿದೆ. ಮಾತನಾಡುವವರು (ಟೀಕಿಸುವವರು) ಶೇ 2ರಷ್ಟಿದ್ದರೆ, ಆರಾಧಿಸುವವರ ಸಂಖ್ಯೆ ಶೇ 98ರಷ್ಟು ಇದೆ. ನಾವು ದೊಡ್ಡದನ್ನು ನೋಡಬೇಕು’ ಎಂದು ಮಾರ್ಮಿಕವಾಗಿ ನುಡಿದರು.

‘ಇಷ್ಟು ದಿನಗಳ ಕಾಲ ಸಿಂಹ ಬಾಯಿ ಮುಚ್ಚಿಕೊಂಡಿತ್ತು. ಈಗ ತೆರೆಯುವಂತೆ ಮಾಡಿದ್ದಾರೆ. ಎದೆ ಉಬ್ಬಿಸಿ, ಮೆಚ್ಚಲೇಬೇಕಾದ ಒಂದು ವಿಚಾರವನ್ನು ಹೇಳಲೇಬೇಕು. ರಾಷ್ಟ್ರಕ್ಕೆ ಧೀಮಂತ ನಾಯಕ ಸಿಕ್ಕಿದ್ದಾನೆ. ಅವನೇ ನಿಜವಾದ ಸಿಂಹ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT