ರಾಯಚೂರು: ರಾಜ್ಯದಲ್ಲಿ ಕೊನೆಯ ದಿನ ರಾಯಚೂರು ನಗರದಲ್ಲಿ ಶನಿವಾರ ನಡೆದ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಚಲನಚಿತ್ರ ನಟಿ ರಮ್ಯಾ ಕೂಡಾ ಭಾಗವಹಿಸಿದ್ದರು.
ಮಂತ್ರಾಲಯ ಮಾರ್ಗದ ಐಬಿ ಕಾಲೋನಿಯಿಂದ ಸಾರ್ವಜನಿಕ ಸಭೆ ಆಯೋಜಿಸಿದ್ದ ವಾಲ್ಕಟ್ ಮೈದಾನದವರೆಗೂ ರಾಹುಲ್ಗಾಂಧಿ ಅವರೊಂದಿಗೆ ಮಾತನಾಡುತ್ತಲೇ ಪಾದಯಾತ್ರೆ ಮಾಡಿದರು.
ಪಾದಯಾತ್ರೆಯಲ್ಲಿ ರಮ್ಯಾ ಅವರು ಸೇರಿಕೊಳ್ಳುತ್ತಿದ್ದಂತೆ ಜನರು ಗುಂಪಾಗುವುದು ಹೆಚ್ಚಳವಾಯಿತು. ಎಂದಿನಂತೆ ರಾಹುಲ್ಗಾಂಧಿ ಅವರು ರಸ್ತೆ ಎರಡು ಅಂಚಿನಲ್ಲಿ ನಿಂತಿದ್ದ ಜನರತ್ತ ಕೈಬೀಸಿಕೊಂಡು ಮುನ್ನಡೆದರು.