ಮಂಗಳೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ‘ದಿ ಅಡ್ವೆಂಟ್ ಆಫ್ ಡಿಜಿಟಲ್ ಗವರ್ನನ್ಸ್: ಇಂಪ್ಲಿಕೇಷನ್ಸ್ ಫಾರ್ ರೆಸ್ಪಾನ್ಸಿವ್ ರೆವಿನ್ಯೂ ಎಡ್ಮಿನಿಷ್ಟ್ರೇಷನ್ ಆಫ್ ಕರ್ನಾಟಕ’ ಪುಸ್ತಕ ರಚಿಸಿದ್ದಾರೆ. 460 ಪುಟಗಳ ಈ ಕೃತಿಯಲ್ಲಿ ಕಂದಾಯ ಇಲಾಖೆಯ ಐತಿಹಾಸಿಕ ನೋಟ, ಸಾಂಸ್ಥಿಕ ರೂಪುರೇಷೆ, ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗಿನ ಅಧಿಕಾರಿಗಳ ಹೊಣೆಗಾರಿಕೆ, ಇ– ಆಡಳಿತ ಬಂದಮೇಲೆ ಆಗಿರುವ ಕ್ರಾಂತಿಕಾರಿ ಬದಲಾವಣೆಗಳು, ಇಲಾಖೆಯ 25ಕ್ಕೂ ಹೆಚ್ಚು ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಯೋಜನೆಗಳು, ಇವುಗಳ ಫಲಿತಾಂಶದ ಜತೆಗೆ ಸಾರ್ವಜನಿಕರು ಮತ್ತು ಅನುಷ್ಠಾನಾಧಿಕಾರಿಗಳ ಅಭಿಪ್ರಾಯ ದಾಖಲಾಗಿದೆ.