‘ಕೃಷ್ಣಾ ಅವರು, ಜಾಹೀರಾತು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಅವರಿಗೆ ಈ ಗೌರವ ಸಲ್ಲಿಸಲಾಗುತ್ತಿದೆ. ಕೃಷ್ಣಾ ಅವರು 1988ರಲ್ಲಿ ಎಎಎಐ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರಿಗೆ 36 ವರ್ಷ. ಸಂಸ್ಥೆಗಾಗಿ ಅವರು ದುಡಿದಿದ್ದಾರೆ. ಹಲವು ಸುಧಾರಣೆಗಳನ್ನು ತಂದಿದ್ದಾರೆ. ಅಧ್ಯಕ್ಷರಾಗಿ ಅವರ ಅವಧಿ ಮುಗಿದ ನಂತರ ಅವರು, ಎಎಎಐ–ಸರ್ಕಾರದ ಸಂಬಂಧ ಸಮಿತಿಯ ಮುಖ್ಯಸ್ಥರಾಗಿ ದುಡಿದಿದ್ದಾರೆ. ಜಾಹೀರಾತಿನ ಮೇಲೆ ತೆರಿಗೆ, ಸೇವಾ ತೆರಿಗೆ ಜಾರಿಯಾಗುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಷನ್ನ (ಎಬಿಸಿ) ಮುಖ್ಯಸ್ಥರಾಗಿ ಮತ್ತು ನ್ಯಾಷನಲ್ ರೀಡರ್ಶಿಪ್ ಸರ್ವೆ ಕೌನ್ಸಿಲ್ನ (ಎನ್ಆರ್ಎಸ್ಸಿ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ’ ಎಂದು ಎಎಎಐ ಹೇಳಿದೆ.