ನಡೆದಿದ್ಧೇನು?: 7 ತಿಂಗಳ ಮಗುಮಗು ದೇವ್ ಜೈಶ್ವಾಲ್ ಪೋಷಕರು ತಮ್ಮ ಅನಾರೋಗ್ಯ ಪೀಡಿತ ಮಗುವಿಗೆ ಚಿಕಿತ್ಸೆ ಕೊಡಿಸಲು ಇಂಡಿಗೋ 6E-2248 ವಿಮಾನದ ಮೂಲಕ ಬೆಂಗಳೂರಿಗೆ ಕರೆತರುತ್ತಿದ್ದರು. ಮಗು ಹೈಡ್ರೋಸೆಫಾಲಸ್(ಮೆದುಳಿನ ಒಳಗಿನ ಕುಳಿಗಳಲ್ಲಿ ದ್ರವವು ಶೇಖರಣೆಯಾಗುತ್ತದೆ) ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ಒಂದು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದೆ.
ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಆರೋಗ್ಯ ಸ್ಥಿತಿ ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ತೀವ್ರ ಹದಗೆಟ್ಟಿತ್ತು. ಈ ಸಂದರ್ಭ ಮಗುವಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದುದರಿಂದ ಹೇಗಾದರೂ ಮಾಡಿ ಮಗುವಿನ ಪ್ರಾಣ ಉಳಿಸಲೇಬೇಕೆಂದು ನಿರ್ಧರಿಸಿದ ವಿಮಾನದ ಸಿಬ್ಬಂದಿ ಬುಧವಾರ ಸಂಜೆ 5.55ರ ಸುಮಾರಿಗೆ ಇಂಧೋರ್ನಲ್ಲಿ ವಿಮಾನದ ತುರ್ತು ಭೂಸ್ಪರ್ಶ ಮಾಡಿದ್ದಾರೆ.