‘ರಾಷ್ಟ್ರೀಯ ಸೇವಾ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದಲ್ಲಿ 2,78,200 ಸ್ವಯಂಸೇವಕರನ್ನು ನೋಂದಣಿ ಮಾಡಿಸುವ ಗುರಿ ನೀಡಲಾಗಿತ್ತು. ಅದನ್ನು ಮೀರಿ ಈಗಾಗಲೇ 5 ಲಕ್ಷ ನೋಂದಾಯಿತ ಸ್ವಯಂಸೇವಕರಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲಿ ಎನ್ಎಸ್ಎಸ್ ಪಠ್ಯದ ಭಾಗ. ಹೀಗಾಗಿ, ಪ್ರತಿಯೊಂದು ಕಾಲೇಜೂ ಇದಕ್ಕೆ ಒಳಪಡುತ್ತದೆ’ ಎಂದು ಸಚಿವ ಅಶ್ವತ್ಥನಾರಾಯಣ ವಿವರಿಸಿದರು.