ನಂತರ ಮಾತನಾಡಿದ ಯಡಿಯೂರಪ್ಪ, ‘ಭಾರತದಲ್ಲೇ ಇದೊಂದು ಪ್ರಥಮ ಮತ್ತು ವಿಶಿಷ್ಠ ಸೇವೆಯಾಗಿದೆ. ಅನಾರೋಗ್ಯಕ್ಕೆ ಒಳಗಾದವರಿಗೆ ತುರ್ತು ಸಂದರ್ಭದಲ್ಲಿ ಸೇವೆ ನೀಡುವ ಕಾರ್ಯವನ್ನು ಏರ್ ಆಂಬುಲೆನ್ಸ್ಗಳು ಮಾಡಲಿವೆ. ರಾಜ್ಯದ ವಿವಿಧ ನಗರಗಳಲ್ಲಿನ ಆಸ್ಪತ್ರೆಗಳಿಗೆ ಸಂಪರ್ಕ ಸಾಧಿಸಿ, ತ್ವರಿತವಾಗಿ ರೋಗಿಗಳನ್ನು ಒಯ್ಯಲು ಈ ಸೇವೆಯು ಸಹಕಾರಿ’ ಎಂದರು.