ಬೆಂಗಳೂರು: ‘ಲ್ಯಾಪ್ಟ್ಯಾಪ್ ಎದುರು ಕುಳಿತು ಬೋಧಿಸುವುದು, ಕೈಯಲ್ಲಿ ಮೊಬೈಲ್ ಹಿಡಿದು ಮನೆಯಲ್ಲೆಲ್ಲಾ ಅಡ್ಡಾಡುತ್ತಾ ಪಾಠ ಆಲಿಸುವುದು ಆನ್ಲೈನ್ ಶಿಕ್ಷಣದ ಕ್ರಮವಲ್ಲ. ಈಗ ಈ ಪದ್ಧತಿ ಅನಿವಾರ್ಯ. ಕೋವಿಡ್ ನಂತರವೂ ಇದು ಮುಂದುವರಿಯಬೇಕು. ಇದಕ್ಕೆ ನಿರ್ದಿಷ್ಟರೂಪುರೇಷೆ ಅಗತ್ಯ’ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿಯ ಮುಖ್ಯಸ್ಥ ಪ್ರೊ.ಕೆ.ಕೆ.ಅಗರವಾಲ್ ತಿಳಿಸಿದರು.