‘ನಾಡಿನ 12 ಸಾಹಿತಿಗಳ ಹೆಸರುಗಳನ್ನು ಈ ಬಾರಿ ಪ್ರಶಸ್ತಿ ಸಮಿತಿಯು ಆಯ್ಕೆ ಮಾಡಿತ್ತು. ಇದರಲ್ಲಿ ಡಾ.ಸೋಮಶೇಖರ ಇಮ್ರಾಪುರ, ಡಾ.ಮಲ್ಲಿಕಾ ಘಂಟಿ ಮತ್ತು ಡಾ. ಜಿನದತ್ತ ದೇಸಾಯಿ ಅವರ ಹೆಸರುಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಬೆಳಗಾವಿಯ ಡಾ.ಗುರುದೇವಿ ಹುಲ್ಲೆಪ್ಪನವರಮಠ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಡಾ.ಇಮ್ರಾಪುರ ಅವರ ಹೆಸರನ್ನು ಅಂತಿಮಗೊಳಿಸಿತು. ಸಮಿತಿಯಲ್ಲಿ ಹಂಪಿಯ ಡಾ.ವೆಂಕಟಗಿರಿ ದಳವಾಯಿ ಮತ್ತು ಕಾಗವಾಡದ ಡಾ.ಎಂ.ಬಿ.ಹೂಗಾರ ಇದ್ದರು’ ಎಂದು ತಿಳಿಸಿದರು.