‘ಅಧಿಸೂಚನೆಯಲ್ಲಿ ಸ್ಪಷ್ಟತೆ ಇದ್ದರೆ, ಮನೆ ಖರೀದಿದಾರರಿಗೂ ಅನುಕೂಲವಾಗುತ್ತದೆ. ಯಾವುದೇ ಅವಶ್ಯಕತೆ ಇಲ್ಲದೆ, ಸ್ಪಷ್ಟ ಕಾರಣವೂ ಇಲ್ಲದೆ ಎಲ್ಲ ಯೋಜನೆಗಳ ಅವಧಿ ವಿಸ್ತರಿಸಿದರೆ, ಸಾಲ ಮಾಡಿ ನಿವೇಶನ ಅಥವಾ ಮನೆ ಖರೀದಿಸಿದ ಗ್ರಾಹಕರಿಗೆ ತೊಂದರೆಯಾಗಲಿದೆ. ಸಾಲದ ಬಡ್ಡಿ, ಮಾಸಿಕ ಕಂತು (ಇಎಂಐ), ಇರುವ ಮನೆಗೆ ಬಾಡಿಗೆ ಕಟ್ಟುವ ಹೊರೆಯೂ ಗ್ರಾಹಕರ ಮೇಲೆ ಬೀಳಲಿದೆ’ ಎಂದು ಹೇಳಿದರು.