‘ಚುನಾವಣೆ ಬಳಿಕ ಬೇರೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಹಾಲಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ರಾಜೀನಾಮೆ ಕೇಳಲಾಗುತ್ತದೆ. ಹಾಗಾದಲ್ಲಿ, ಈ ಸರ್ಕಾರದಿಂದ ನೇಮಕಗೊಂಡವರು ಕೆಲವೇ ತಿಂಗಳು ನಾಮಕಾವಸ್ತೆ ಇದ್ದಂತಾಗುತ್ತದೆ. ಸರ್ಕಾರಗಳು ಬದಲಾದ ಕೂಡಲೇ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರಿಂದ ರಾಜೀನಾಮೆ ಪಡೆಯುವ ಪ್ರವೃತ್ತಿ ತಪ್ಪಿಸಬೇಕು. ಈ ಬಗ್ಗೆ ನನ್ನ ನೇತೃತ್ವದ ಸಮಿತಿಯು ಹಿಂದಿನ ಸರ್ಕಾರಕ್ಕೆ ಸಲ್ಲಿಸಿದ ‘ಸಾಂಸ್ಕೃತಿಕ ನೀತಿ’ಯ ವರದಿಯಲ್ಲಿ ಒಂದು ಮಾದರಿ ಮಾರ್ಗವನ್ನು ಶಿಫಾರಸು ಮಾಡಿತ್ತು. ಕುಲಪತಿಗಳ ಆಯ್ಕೆಗೆ ಶೋಧನಾ ಸಮಿತಿ ರಚಿಸಿ ಹೆಸರುಗಳನ್ನು ಪಡೆದಂತೆ, ಅಕಾಡೆಮಿಗಳ ನೇಮಕಕ್ಕೂ ಅದನ್ನೇ ಅನ್ವಯಿಸಬೇಕು. ಮುಂದೆ ಬರುವ ಸರ್ಕಾರ ಈ ಶಿಫಾರಸುಗಳ ಬಗ್ಗೆ ಸಾಂಸ್ಕೃತಿಕ ವಲಯದವರ ಜೊತೆಗೆ ಸಮಾಲೋಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.