ಬೆಂಗಳೂರು: ರಾಜ್ಯದ 30ತಾಲ್ಲೂಕುಗಳಲ್ಲಿ ಹೊಸದಾಗಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ವಿಧಾನಸಭೆಯಲ್ಲಿ ಜೆಡಿಎಸ್ನ ನಾಗನಗೌಡ ಕಂದಕೂರ ಅವರ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಅವರು, ‘ತಾಲ್ಲೂಕುಗಳ ಸಂಖ್ಯೆ 177ರಿಂದ 227ಕ್ಕೆ ಏರಿಕೆಯಾಗಿದೆ. ಎಲ್ಲ ತಾಲ್ಲೂಕುಗಳಲ್ಲೂ ಒಂದೇ ವರ್ಷದಲ್ಲಿ ಆಡಳಿತ ಸೌಧ ನಿರ್ಮಾಣ ಕಷ್ಟ’ ಎಂದರು.
‘ಈ ಆರ್ಥಿಕ ವರ್ಷದಲ್ಲಿ 30 ತಾಲ್ಲೂಕುಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಆದ್ಯತೆಯ ಅನುಸಾರ ಮಂಜೂರು ಮಾಡಲಾಗುವುದು’ ಎಂದರು.
ಗುರುಮಠಕಲ್ ತಾಲ್ಲೂಕಿಗೆ ಹೊಸ ಆಡಳಿತ ಸೌಧ ಮಂಜೂರು ಮಾಡುವಂತೆ ಶಾಸಕರು ಮನವಿ ಮಾಡಿದರು.