ನಗರ ಹೊರ ವಲಯದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಎಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಭಾನುವಾರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಎಲೆಕ್ಟ್ ಅಧ್ಯಕ್ಷರಾಗಿ ವಿಜಯಪುರದ ಡಾ.ರವೀಂದ್ರನಾಥ ಎಂ.ಮೇಟಿ, ಕಾರ್ಯದರ್ಶಿಯಾಗಿ ಡಾ.ಕೆ.ಎನ್.ಚಂದ್ರಮೋಹನ್, ಎಲೆಕ್ಟ್ ಕಾರ್ಯದರ್ಶಿಯಾಗಿ ಡಾ.ಪಿ.ಆರ್.ತಿಮ್ಮರಾಜು, ಖಜಾಂಚಿಯಾಗಿ ಡಾ.ಎನ್.ನರಸಿಂಹಮೂರ್ತಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಡಾ.ಬಿ.ಕೆ.ಮಂಜುನಾಥ್ ಆಯ್ಕೆಯಾದರು.