ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರಾಮಸ್ವಾಮಿ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ’ಅರಕಲಗೂಡು ಕ್ಷೇತ್ರದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು 2022ರ ಮೇ ಒಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಒಪ್ಪಿ ಪರಿಷ್ಕೃತ ಪಟ್ಟಿ ಸಲ್ಲಿಸಿದ್ದಾರೆ‘ ಎಂದರು. ಈ ಮಾತಿನಿಂದ ಅಸಮಾಧಾನಗೊಂಡ ರಾಮಸ್ವಾಮಿ, ’ಸರ್ಕಾರ ಹೇಳಿದಂತೆ ಗುತ್ತಿಗೆದಾರರು ಕೇಳಬೇಕಲ್ಲ‘ ಎಂದು ಪ್ರಶ್ನಿಸಿದರು.