ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಜನ್ಮದಿನಾಚರಣೆಗೆ ಗೌರವ ಸಲ್ಲಿಸಿದ್ದಾರೆ.
'ಅಟಲ್ ಅವರು ಗೌರವಾನ್ವಿತ ರಾಜನೀತಿಜ್ಞ ಮತ್ತು ಒಬ್ಬ ಆತ್ಮೀಯ ಗೆಳೆಯ. ಆಧುನಿಕ ಭಾರತಕ್ಕೆ ಅವರ ಕೊಡುಗೆ ಅಪಾರ. ಅವರ ಕೊಡುಗೆಗಳುಎಂದಿಗೂ ನೆನಪಿನಲ್ಲಿ ಉಳಿಯುತ್ತವೆ. ಅವರ 97ನೇ ಜನ್ಮದಿನಾಚರಣೆಯ ಅಂಗವಾಗಿ ಗೌರವಯುತ ನಮನಗಳು' ಎಂದು ಎಚ್ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.
Respectful tributes to former Prime Minister Sri Atal Bihari Vajpayee on his 97th birth anniversary. He was a statesman and a dear friend. His contributions to modern India will always be remembered. pic.twitter.com/0eKJcZVwbb
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು, 'ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಕವಿ ಮನಸ್ಸಿನ ರಾಜನೀತಿಜ್ಞರು. ರಾಜಕೀಯ ಅಜಾತಶತ್ರುವಾಗಿದ್ದ ಅವರಿಗೆ ಗೌರವಪೂರ್ವಕ ನಮನಗಳು' ಎಂದು ಟ್ವೀಟ್ ಮಾಡಿದ್ದಾರೆ.
ಭಾರತದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಕವಿ ಮನಸ್ಸಿನ ರಾಜನೀತಿಘ್ನರು ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. pic.twitter.com/0CMu47um5u