ವಿದ್ವಾಂಸ ಪಿ.ವಿ. ನಾರಾಯಣ, ‘ಇವತ್ತು ಧರ್ಮ ಮತ್ತು ದೇವರ ಹೆಸರಲ್ಲಿ ಏನೇನೆಲ್ಲ ನಡೆಯುತ್ತಿವೆ. ಧರ್ಮವನ್ನು ಕೇವಲ ಆಚರಣೆ ವಿಧಾನದಲ್ಲಿ ನೋಡಿ, ವ್ಯಕ್ತಿಯನ್ನು ಅಳೆಯುವ ಸಮಾಜ ಇದಾಗಿದೆ. ಅರಿವು ಮೂಡಿಸುವವರ ಸಂಖ್ಯೆ ಕಡಿಮೆ ಆಗಿರುವುದರಿಂದಚಿಕ್ಕಮಕ್ಕಳಲ್ಲಿ ದ್ವೇಷ ಹೆಚ್ಚುತ್ತಿದೆ.ಜಾತಿ, ಧರ್ಮ ಮೀರಿದ ಆಲೋಚನಾ ಕ್ರಮ ಬರುವವರೆಗೂ ಈ ಸಮಾಜ ಉದ್ಧಾರ ಆಗುವುದಿಲ್ಲ’ ಎಂದು ಹೇಳಿದರು.